ಉಡುಪಿ, ಡಿ.24; ಉಡುಪಿಯ ಖ್ಯಾತ ಕಾದಂಬರಿಕಾರ, ಕತೆಗಾರ, ಕವಿ, ನಾಟಕಕಾರ, ವಿಮರ್ಶಕ, ನಟ ಪ್ರೊ. ರಾಮದಾಸ್ ಕುಂಡಂತಾಯ ಅವರು ನಿನ್ನೆ ಡಿ.23ರಂದು ನಿಧನರಾದರು.
ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಹಳೆಗನ್ನಡ ಪಾಠಗಳನ್ನು ಭೋಧಿಸುತ್ತಿದ್ದರು. ಪ್ರೊ. ರಾಮದಾಸ್ ಅವರು ‘ಎಳನಿಂಬೆ’ ಎಂಬ ಆತ್ಮಚರಿತ್ರೆಯನ್ನು ಬರೆದಿದ್ದಾರೆ.


