ಬಳ್ಳಾರಿ ಮಹಾನಗರ ಪಾಲಿಕೆ ಯ‌ ಮೇಲೆ‌ ಲೋಕಾಯುಕ್ತ ದಾಳಿ

0
2528

BP NEWS: ಬಳ್ಳಾರಿ: ನವೆಂಬರ್.16 : ಬಳ್ಳಾರಿ ಮಹಾನಗರ ಪಾಲಿಕೆ ಕಛೇರಿಯ ಸಿಬ್ಬಂದಿಗಳಾದ ಅಬ್ದುಲ್ ಖಾದರ್, ಪಸ್ಟ್ ಗ್ರೇಡ್ ಕಂದಾಯ ನಿರೀಕ್ಷಕರು, ಮತ್ತು ಚಿನ್ನಯ್ಯ ಕೇಸ್ ವರ್ಕರ್ ರವರು ಫಿರ್ಯಾದಿದಾರರಾದ ಕಿರಣ್ ಯಾದವ್, ಜುವೇಲರಿ ವ್ಯಾಪಾರಿ ಬಳ್ಳಾರಿ ರವರಿಗೆ ಫಿರ್ಯಾದಿ ರವರ ನಿವೇಶನಕ್ಕೆ ಈ ಖಾತೆ (ಫಾರಂ ನಂ: 2 ಮತ್ತು 3) ಮಾಡಿ ಕೊಡದೆ ಕಛೇರಿಗೆ ಅಲೆಸುತ್ತಾ ಸರ್ಕಾರಿ ಕೆಲಸ ಮಾಡಿಕೊಡದೆ ರೂ.80,000/-ಗಳ ಹಣ ನೀಡುವಂತೆ ಕಿರಣ್ ಯಾದವ್ ಅವರಿಗೆ ಡಿಮೆಂಡ್ ಮಾಡಿದ್ದಾರೆ.

ಮನನೊಂದ ಕಿರಣ್ ಯಾದವ್ ಇಂದು ಅಂದರೆ ದಿನಾಂಕ:16/11/2022 ರಂದು ಕರ್ನಾಟಕ ಲೋಕಾಯುಕ್ತ ಕಛೇರಿ ಬಳ್ಳಾರಿಗೆ ಈ ಬಗ್ಗೆ ದೂರು ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಸಾಕ್ಷಿಗಳ ಆಧಾರದ ಮೇಲೆ ಪ್ರಕರಣವನ್ನು ದಾಖಲು ಮಾಡಿಕೊಂಡು ನಂತರ, ಕರ್ನಾಟಕ ಲೋಕಾಯುಕ್ತ ಪೊಲೀಸ್‌ರು ಫಿರ್ಯಾದಿಯೊಂದಿಗೆ ಮಹಾನಗರ ಪಾಲಿಕೆ ಕಛೇರಿಗೆ ದಾಳಿ ಮಾಡಿದಾಗ,
ಲೋಕಾಯುಕ್ತ ಪೊಲೀಸರು ಹಣದ ಸಮೇತ ಇಬ್ಬರನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.

LEAVE A REPLY

Please enter your comment!
Please enter your name here